ಸುದ್ದಿ

ಯುವಕ ನಿರುದ್ಯೋಗ ಹೋಗಲಾಡಿಸಲು ವಿಐಎಸ್ಎಲ್ ಮತ್ತು ಎಚ್ಎಂಟಿ ಕಾರ್ಖಾನೆಗೆ ಪುನಶ್ಚೇತನ: – ಎಚ್.ಡಿ.ಕುಮಾರಸ್ವಾಮಿ

Share It

ರಾಜ್ಯದ ಯುವಕರ ನಿರುದ್ಯೋಗವನ್ನು ಹೋಗಲಾಡಿಸಲು ರಾಜ್ಯದ ಕಾರ್ಖಾನೆಗಳಿಗೆ ಪುನಶ್ಚೇತನ ನೀಡಲಾಗುವುದು”

ಮಂಡ್ಯ: ಮಂಡ್ಯದಲ್ಲಿ ನಡೆದ 87ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಡು-ನುಡಿ ಅಭಿವೃದ್ಧಿಗೆ ನಾನು ಸದಾ ಬದ್ದ. ಈ‌ ನಿಟ್ಟಿನಲ್ಲಿ ರಾಜ್ಯದ ಯುವಕ ನಿರುದ್ಯೋಗ ಹೋಗಲಾಡಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾರನಾಡಿದ ಅವರು ಸ‌ರ್.ಎಂ. ವಿಶ್ವೇಶ್ವರಯ್ಯ ಅವರು ಭದ್ರಾವತಿಯಲ್ಲಿ ಸ್ಥಾಪಿಸಿರುವ ವಿಐಎಸ್‌ ಎಲ್ ಕಾರ್ಖಾನೆಯನ್ನು 15 ಸಾವಿರ ಕೋಟಿ ರು. ವೆಚ್ಚದಲ್ಲಿ ಪುನಶ್ಚತನಗೊಳಿಸುವುದಾಗಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಯುವಕರ ನಿರೋದ್ಯೋಗವನ್ನು ಹೋಗಲಾಡಿಸಲು 2016ರಲ್ಲಿ ಮುಚ್ಚಿರುವ ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ಪುನರ್‌ಪ್ರಾರಂಭಿಸುವುದಾಗಿ ತಿಳಿಸಿ ದರು.

ಅಲ್ಲದೆ ಬೆಂಗಳೂರಿನಲ್ಲಿರುವ ಎಚ್‌ಎಂಟಿ ಕಾರ್ಖಾನೆ ಯನ್ನು ಪುನರ್‌ಪ್ರಾರಂಭಿಸು ವುದಾಗಿ ಹೇಳಿದರು. ರಾಜ್ಯ ಸರ್ಕಾರ ಸಹಕಾರ ನೀಡಿದರೆ ಮಂಡ್ಯ, ತುಮಕೂರು ಹಾಗೂ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಕಾರ್ಖಾನೆ ಪ್ರಾರಂಭಿಸಿ ಯುವಕರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.


Share It

You cannot copy content of this page