ಸುದ್ದಿ

ಹೆರಿಗೆ ಮಾಡಿಸಲು ಲಂಚ; ಲೋಕಾಯುಕ್ತ ಪೊಲೀಸರಿಂದ ಸರ್ಕಾರಿ ಆಸ್ಪತ್ರೆ ನಸ್೯ ಅರೆಸ್ಟ್

Share It

ಬೆಂಗಳೂರು:ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಟಿ.ದಾಸರಹಳ್ಳಿಯ ಮಲ್ಲಸಂದ್ರ ಸರ್ಕಾರಿ ಹೆರಿಗೆ ಆಸ್ಪತ್ರೆ ನರ್ಸ್ ಗಂಗಲಕ್ಷ್ಮೀ ಎಂಬುವರು ಹೆರಿಗೆ ಮಾಡಿಸಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರ ಆಸ್ಪತ್ರೆಗೆ ಬಂದಿದ್ದ ಬಾಗಲಗುಂಟೆ ಕಮಲಮ್ಮ ಬಳಿ ಹೆರಿಗೆ ಮಾಡಿಸಲು 6,500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ ಮುಂಗಡವಾಗಿ 5000 ಫೋನ್‌ಪೇ ಮೂಲಕ ಹಣ ಪಡೆಯುವಾಗ ನರ್ಸ್ ಗಂಗಲಕ್ಷ್ಮಿ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾಳೆ. ಬಳಿಕ ಲೋಕಾಯಕ್ತ ಪೊಲೀಸರು ಗಂಗಾಲಕ್ಷ್ಮೀಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈಕೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ.


Share It

You cannot copy content of this page