ಸುದ್ದಿ

ಅಂಬೇಡ್ಕರ್ ನಿಂದನೆ ಉದ್ದೇಶಪೂರ್ವಕ: ಕೇಜ್ರಿವಾಲ್

Share It

ನವದೆಹಲಿ: ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿರುವ ಹೇಳಿಕೆಯನ್ನು ಖಂಡಿಸಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ಆಧುನಿಕ ಭಾರತದಲ್ಲಿ ಅಂಬೇಡ್ಕ‌ರ್ ಅವರು ದೇವರಿಗಿಂತ ಕಡಿಮೆಯಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂಬೇಡ್ಕ‌ರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡನೀಯ, ಅವರಾಡಿದ ಮಾತುಗಳು ಬಹಳ ನೋವು ತರಿಸುವಂತಹವು. ಅವರು ಬಾಬಾ ಸಾಹೇಬರನ್ನು ಎಷ್ಟು ದ್ವೇಷಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದರು.

‘ಅಮಿತ್ ಶಾ ಅವರಿಂದ ಬಾಯಿ ತಪ್ಪಿ ಈ ಮಾತುಗಳು ಬಂದಿರಬಹುದು ಎಂದು ಮೊದಲಿಗೆ ಭಾವಿಸಿದ್ದೆವು. ಆದರೆ ಮರು ದಿನ ಪ್ರಧಾನಿ ಮೋದಿ ಅವರು ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಅವರು ಉದ್ದೇಶಪೂರ್ವಕವಾಗಿಯೇ ಹೇಳಿದ್ದಾರೆ ಎನಿಸುತ್ತದೆ’ ಎಂದು ಹೇಳಿದ್ದಾರೆ.


Share It

You cannot copy content of this page