ಬೆಂಗಳೂರು: ವಿವಿಧ ಇಲಾಖೆಗಳಲ್ಲಿನ 67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ಜತೆಗೆ ವೇತನ ಶ್ರೇಣಿ ಪರಿಷ್ಕರಿಸಿ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಮಂಗಳವಾರ ಆದೇಶಿಸಿದೆ.
65 ಐಪಿಎಸ್ಗಳ ವರ್ಗ, ಬಡ್ತಿ, ವೇತನ ಹೆಚ್ಚಳ:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 65 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ವೇತನ ಹೆಚ್ಚಳ ನೀಡಿ ಕೆಲವರನ್ನು ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ.
ವಿಕಾಸ್ ಕುಮಾರ್ ವಿಕಾಶ್- ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ), ರಮಣ್ ಗುಪ್ತ- ಬೆಂ.ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಗುಪ್ತದಳ), ಡಾ. ಚೇತನ್ ಸಿಂಗ್ ರಾಥೋಡ್-ಉತ್ತರ ವಲಯ ಐಜಿಪಿ(ಬೆಳಗಾವಿ), ಅಮಿತ್ ಸಿಂಗ್- ಪಶ್ಚಿಮ ವಲಯ ಐಜಿಪಿ (ಮಂಗಳೂರು), ಕಾರ್ತಿಕ್ ರೆಡ್ಡಿ- ಡಿಐಜಿಪಿ ಪ್ರಧಾನ ಕಚೇರಿ(ಆಡಳಿತ), ಕುಲದೀಪ್ ಕುಮಾರ್ ಆರ್. ಜೈನ್- ಬೆಂ.ನಗರ ಜಂಟಿ ಪೊಲೀಸ್ ಆಯುಕ್ತ (ಆಡಳಿತ), ಜಿ. ಸಂಗೀತಾ -ಡಿಐಜಿಪಿ ಸಿಐಡಿ ಅರಣ್ಯ ವಿಭಾಗ, ರೇಣುಕಾ ಕೆ.ಸುಕುಮಾರ್-ಡಿಸಿಆರ್ಇ ಡಿಐಜಿಪಿ, ಜೆ.ಕೆ. ರಶ್ಮಿ – ಡೆಪ್ಯೂಟಿ ಕಮಾಂಡೆಂಟ್, ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಉಳಿದಂತೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎನ್. ಶಶಿಕುಮಾರ್, ಗುಪ್ತದಳ ಐಜಿಪಿ ಡಾ.ವೈ.ಎಸ್. ರವಿಕುಮಾರ್, ಸೀಮಾ ಲಡ್ಕರ್- ಮೈಸೂರು ನಗರ ಆಯುಕ್ತರು ಸೇರಿ ಹಲವರಿಗೆ ವೇತನ ಹೆಚ್ಚಳ ಮತ್ತು ಮುಂಬಡ್ತಿ ನೀಡಿ ಇರುವ ಸ್ಥಳದಲ್ಲಿಯೇ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ.