ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ವಿಪಕ್ಷಗಳ ಕುರಿತು ಸುಪ್ರೀಂ ಕೋಟ್೯ನ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಧವಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿವೃತ್ತ ನ್ಯಾ. ಡಿ.ವೈ. ಚಂದ್ರಚೂಡ್
‘ಸಾಂವಿಧಾನಿಕವಾಗಿ ಅಂತಿಮ ತೀರ್ಪು ಕೊಡುವ ಅಧಿಕಾರಹೊಂದಿರುವ ಸುಪ್ರೀಂಕೋರ್ಟ್, ಈಗಾಗಲೇ ಹಲವು ಬಾರಿ ಇವಿಎಂಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ. ನಾವು ಅದನ್ನು ಮರು ಮಾತಾಡದೆ ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.